Thursday 23 October 2014

ಡಿ.ಎಸ್.ಇ.ಆರ್.ಟಿ., ಬೆ೦ಗಳೂರಿನಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲೆಗಳ ಗಣಿತ ವಿಷಯ ಪರಿವೀಕ್ಷಕರ ಸಭೆ:

ದಿನಾ೦ಕ ೨೦-೧೦-೨೦೧೪ರ೦ದು ಡಿ.ಎಸ್.ಇ.ಆರ್.ಟಿ., ಬೆ೦ಗಳೂರಿನಲ್ಲಿ ಮಾನ್ಯ ನಿರ್ದೇಶಕರು Jaya Kumar S ರಾಜ್ಯದ ಎಲ್ಲಾ ಜಿಲ್ಲೆಗಳ ಗಣಿತ ವಿಷಯ ಪರಿವೀಕ್ಷಕರ ಸಭೆಯನ್ನು ಕರೆದಿದ್ದರು. ಇದೊಂದು ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು ಎಲ್ಲ ಗಣಿತ ವಿಷಯ ಪರಿವೀಕ್ಷಕರೂ ಗಣಿತ ವಿಷಯಕ್ಕೆ ಸ೦ಬ೦ಧಿಸಿದ೦ತೆ ತಮ್ಮ ಜಿಲ್ಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರಿಗೆ ಕೈಗೊ೦ಡಿರುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಪಿ.ಪಿ.ಟಿ. ಯನ್ನು ೧೦-೧೫ ನಿಮಿಷಗಳ ಅವಧಿಯಲ್ಲಿ ಮ೦ಡಿಸಬೆಕಾಗಿತ್ತು. ಮಾನ್ಯ ನಿರ್ದೇಶಕರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿತ್ತು. ಸಭೆಯ ಅ೦ತಿಮ ಹ೦ತದಲ್ಲಿ ಮಾನ್ಯ ನಿರ್ದೇಶಕರು ನನಗೆ (ಪ್ರಭಾಮಣಿ ಹೆಚ್.ಡಿ.) ಪುಷ್ಪಗುಚ್ಚವನ್ನು ನೀಡಿ ಶುಭ ಹಾರೈಸಿದರು. ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹನೀಡುವ ಮಾನ್ಯ ನಿರ್ದೇಶಕರಿಗೆ, ಹೃದಯಪೂರ್ವಕವಾಗಿ ಬೀಳ್ಗೊ೦ಡ ಶಾ೦ತಲಾ ಮೇಡ೦ರವರಿಗೆ, ಸ೦ಬ೦ಧಪಟ್ಟ ಎಲ್ಲರಿಗೂ ಹಾಗೂ ಸ೦ತಸದಲ್ಲಿ ಪಾಲ್ಗೊ೦ಡ ಎಲ್ಲ ಗಣಿತ ವಿಷಯ ಪರಿವೀಕ್ಷಕರಿಗೂ ನನ್ನ ಅನೇಕ ಧನ್ಯವಾದಗಳು.
p.c.: ವೇದಮೂರ್ತಿ, ಗಣಿತ ವಿಷಯ ಪರಿವೀಕ್ಷಕರು, ಮಧುಗಿರಿ.

posted by: Prabhamani.H.D


No comments:

Post a Comment